ಜೂನ್ ಅಂತ್ಯದೊಳಗೆ ರೈಲು: ಡಿಎಂಆರ್<br />Vijaya Karnataka | Updated Mar 15, 2018, 05:00 AM IST<br /><br />ಹಗರಿಬೊಮ್ಮನಹಳ್ಳಿ:ಜೂನ್ ಅಂತ್ಯದೊಳಗ...
more... class="reversehighlighted">ಾಗಿ ಹೊಸಪೇಟೆಯಿಂದ ಪಟ್ಟಣದ ಮಾರ್ಗವಾಗಿ ಕೊಟ್ಟೂರಿಗೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವುದಾಗಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ತಿಳಿಸಿದರು.<br />ಪ್ರಯಾಣಿಕರ ರೈಲು ಸಂಚಾರದ ತಪಾಸಣೆ ಹಿನ್ನೆಲೆಯಲ್ಲಿ ಪಟ್ಟಣದ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ಪ್ರಯಾಣಿಕರ ರೈಲು ಸಂಚಾರದ ಹಿನ್ನೆಲೆಯಲ್ಲಿ ಈಗಾಗಲೆ ಮಾರ್ಗದಲ್ಲಿ ಕೈಗೊಂಡ ಕಾಮಗಾರಿಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರಮುಖವಾಗಿ ರೈಲು ಸಂಚಾರದ ಸುರಕ್ಷ ತೆ ಕ್ರಮ ಕುರಿತು ವಿಶೇಷ ತಂಡದಿಂದ ಪರಿಶೀಲನೆ ಕೈಗೊಳ್ಳಲಾಗಿದೆ. ಕೊಟ್ಟೂರಿನ ಬಳಿ ಮಾರ್ಗದ ಟ್ರ್ಯಾಕ್ಗಳ ಗುಣಮಟ್ಟದ ತಪಾಸಣೆ ನಡೆಸಿದೆ. ಪ್ರಯಾಣಿಕರ ರೈಲು ಸಂಚಾರದ ಬಹಳಷ್ಟು ಕಾಮಗಾರಿಗಳು ಬಾಕಿ ಉಳಿದಿರುವುದರಿಂದ ಸಂಚಾರ ವಿಳಂಬವಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಜೂ.ಅಂತ್ಯದೊಳಗಾಗಿ ಮಾರ್ಗದಲ್ಲಿ ರೈಲು ಸಂಚಾರ ಬಹುತೇಕ ಆರಂಭವಾಗಲಿದೆ ಎಂದರು. ರೈಲು ನಿಲ್ದಾಣದವನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೂಡಲೆ ನಿಲ್ದಾಣದಲ್ಲಿ ಕಾವಲು ಸಿಬ್ಬಂದಿ ನೇಮಕ ಮಾಡುವಂತೆ ವಿಎಚ್ಪಿ ಮುಖಂಡ ಎಚ್.ಎಂ.ಚನ್ನವೀರ್ ಒತ್ತಾಯಿಸಿದಾಗ, ಈ ಕುರಿತಂತೆ ತಿಂಗಳೊಳಗಾಗಿ ಕ್ರಮಕೈಗೊಳ್ಳಲಾಗುವುದು ಎಂದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ನಿಗದಿತ ಅವಧಿಯಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ಹೊಸಪೇಟೆ ಕೊಟ್ಟೂರು ಹರಿಹರ ರೈಲ್ವೇ ಹೋರಾಟ ಸಮಿತಿ ಸಂಚಾಲಕ ಕೊಟ್ರೇಶ್ ಶೆಟ್ಟರ್ ಆಗ್ರಹಿಸಿದರು. ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಯರಿಸ್ವಾಮಿ, ಲಕ್ಷ ್ಮಣ ಕಲಾಲ್, ಛೇಂಬರ್ ಆಫ್ ಕಾಮರ್ಸ್ನ ಚಂದ್ರಯ್ಯ, ಕೋರಗಲ್ ಗಿರೀಶ್, ಕನ್ನಡ ಸೇನೆಯ ಸಂಚಿ ಶಿವಕುಮಾರ್ ಇತರರಿದ್ದರು.